ಡಿಸೆಂಬರ್ 7 ರಿಂದ ಚಳಿಗಾಲದ ಅಧಿವೇಶನ – ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲಿ

khushihost

ಬೆಂಗಳೂರು –

ಚಳಿಗಾಲದ ಅಧಿವೇಶನಕ್ಕೆ ಮಹೂರ್ತ ನಿಗದಿಯಾಗಿದೆ. ಡಿಸೆಂಬರ್ 7 ರಿಂದ ಬೆಂಗಳೂರಿನಲ್ಲಿ ಅಧಿವೇಶನ ನಡೆಯಲಿದೆ.ದಿನಾಂಕ ನಿಗದಿಯಾಗಿದ್ದು ಡಿ.7 ರಿಂದ 15ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ

ಯಡಿಯೂರಪ್ಪ ಹೇಳಿದ್ದಾರೆ. ಸಾಮಾನ್ಯವಾಗಿ ಪ್ರತಿ ಬಾರಿ ಚಳಿಗಾಲದ ಅಧಿವೇಶನವನ್ನು ಕುಂದಾನಗರಿ ಬೆಳಗಾವಿಯಲ್ಲಿ ನಡೆಸಲಾಗುತ್ತಿತ್ತು ಆದರೆ ಈ ಬಾರಿ ಅಧಿವೇಶನವನ್ನು ಬೆಳಗಾವಿಯ ಬದಲಾಗಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಇವೆಲ್ಲದರ ನಡುವೆ ನಾಡದೋರೆ ಮುಖ್ಯಮಂತ್ರಿ ಈ ಮಾಹಿತಿಯನ್ನು ನೀಡಿ ನಂತರ ದೆಹಲಿಯತ್ತ ಪ್ರಯಾಣವನ್ನು ಬೆಳೆಸಿದ್ರು
ಸಿಎಂ ದೆಹಲಿಗೆ ಪ್ರಯಾಣ – ಸಂಪುಟ ಪುನಾರಚನೆ ಮಾಡ್ತಾರೋ ಇಲ್ಲವೇ ವಿಸ್ತರಣೆ ಆಗುತ್ತದೆಯೋ ಈ ವಿಚಾರ ಕುರಿತು ಚರ್ಚೆ ನಡೆಸಲು ಹೈಕಮಾಂಡ್ ಭೇಟಿ ಮಾಡಲು ಮುಖ್ಯಮಂತ್ರಿ ದೆಹಲಿಗೆ ತೆರಳಿದರು.

ಬೆಂಗಳೂರಿನಿಂದ ವಿಶೇಸ ವಿಮಾನದ ಮೂಲಕ ಬಿಎಸ್ ವೈ ದೆಹಲಿಗೆ ತೆರಳಿದರು. ದೆಹಲಿಯಿಂದ ಬಂದ ಬಳಿಕ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.